Sunday 20 January 2013

ಕೃಷಿ ದರ್ಶನ


ಕೃಷಿ ದರ್ಶನಕ್ಕೆ ಮುನ್ನ......



  ಭಾರತವು ಕೃಷಿ ಆಧಾರಿತ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿದೆ.ನಮ್ಮ ಮಕ್ಕಳು ಈ ಸಂಸ್ಕøತಿಯ ಭಾಗವೇ ಆಗಿದ್ದರೂ ಜಾಗತೀಕರಣ ಮತ್ತು ಪಶ್ಚಿಮದ ದೇಶಗಳ ಸಂಸ್ಕøತಿಯ ಪ್ರಭಾವದಿಂದಾಗಿ ನಮ್ಮ ಕೃಷಿಸಂಸ್ಕøತಿಯಿಂದ ಅವರು ವಿಮುಖರಾಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಸ್ಪಷ್ಟವಾಗತೊಡಗಿದೆ.ಶ್ರಮ ಸಂಸ್ಕøತಿಯ ಮಹತ್ವ ಇತ್ತೀಚೆಗೆ ಕಡಿಮೆಯಾಗುತ್ತಾ, ಕೃಷಿಗೂ ಆಧುನಿಕ ವಿದ್ಯಾಭ್ಯಾಸಕ್ಕೂ ಅಂತರ ಹೆಚ್ಚುತ್ತಿದೆ.ಇಂತಹ ಕಾಲಗಟ್ಟದಲ್ಲಿ ಮಕ್ಕಳಿಗಾಗಿ `ಚಿಣ್ಣರ ಕೃಷಿ ದರ್ಶನ’ ಎಂಬ ಕಾರ್ಯಕ್ರಮವನ್ನು 
                                                    ಹಮ್ಮಿಕೊಂಡಿರುವುದು  ಮಕ್ಕಳ ಬದುಕನ್ನು ಪೃಕೃತಿಯ ಹತ್ತಿರಕ್ಕೆ ತರುವಲ್ಲಿ ಪೂರಕವಾದ ಹೆಜ್ಜೆ.
  ಮಕ್ಕಳಿಗೆ ಕೃಷಿ ಚಟುವಟಿಕೆಗಳು,ಕೃಷಿಕರ ಬದುಕು ಮತ್ತು ಕೃಷಿಯಾಧಾರಿತ ಹಾಗೂ ಕೃಷಿಗೆ ಸಂಬಂಧಿಸಿದ ಉಪಕಸುಬುಗಳ ಕುರಿತು ಹತ್ತಿರದ ನೋಟವನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶ.ಗಾಂಧಿ ತತ್ವಗಳನ್ನು ಕೃಷಿಯ ಮೂಲಕ ಸಾಧಿಸಿದ,ಕರ್ನಾಟಕದ ಪುಕವೋಕಾ ಎಂದೇ ಗುರುತಿಸಲ್ಪಟ್ಟ ರಾಮಚಂದ್ರರಾಯರ ಚೇರ್ಕಾಡಿಯ ತೋಟವನ್ನು ಎಷ್ಟು ಮಕ್ಕಳು ನೋಡಿದ್ದಾರೆ?ಬ್ರಹ್ಮಾವರದ ಕೃಷಿಕೇಂದ್ರದ ಕುರಿತು ಎಷ್ಟು ಮಕ್ಕಳಿಗೆ ಮಾಹಿತಿ ಇದೆ? ಮಗುವು ಜ್ಞಾನದ ಪುನಃರಚನೆಯಲ್ಲಿ ತೊಡಗಲು ಇಂತಹ ಭೇಟಿಗಳು ಅವಶ್ಯಕ ಎಂಬುದು 2005 ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟಿನ ಆಶಯ.

   ಜೊತೆಗೆ, ಕೃಷಿಯ ಯಾಂತ್ರೀಕರಣ,ಸಾವಯವ ವಿಧಾನದ ಕೃಷಿ ಚಟುವಟಿಗಳು ಮುಂತಾದ `ಪ್ರಗತಿಪರ’ ಮತ್ತು `ಪ್ರಕೃತಿಪರ’ ಕೃಷಿ ಚಳುವಳಿಗಳ ಕುರಿತು ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಪರಿಕಲ್ಪನೆಗಳು ಉಂಟಾಗಲು ಮತ್ತು ಅವರು ಆ ಕುರಿತು ತಮ್ಮದೇ ನಿಲುವುಗಳನ್ನು ತಳೆಯಲು ಈ ಕಾರ್ಯಕ್ರಮ ಸಹಾಯಕವಾಗಬಹುದು.
*ಉದಯ ಗಾಂವಕಾರ


No comments: