Sunday 4 August 2019

ಚಂದ್ರನಲ್ಲಿ ಮೊದಲ ಹೆಜ್ಜೆ

ಮನುಷ್ಯ ಕುಲದ ಧೈತ್ಯ ನೆಗೆತಕ್ಕೆ ಈಗ ಐವತ್ತು ವರ್ಷಗಳು. ನಂಬಿಕೆಗಳ ಪೆಟ್ಟಿಗೆಗೆ ಸುತ್ತಿಗೆಯ ಪೆಟ್ಟುಕೊಟ್ಟು, ಮಾನವ ಪ್ರಯತ್ನಕ್ಕೆ ಸಾಧ್ಯವಾಗದ್ದು ಯಾವುದೂ ಇಲ್ಲವೆಂಬ ಆತ್ಮವಿಶ್ವಾಸವನ್ನು ತುಂಬಿದ ಅಪೋಲೋ11 ಚಂದ್ರಯಾನದ ಕಥೆ ಬಹಳ ರೋಚಕ. ಬಹುಷಃ ಮುಂದಿನ ಎಷ್ಟೋ ತಲೆಮಾರುಗಳವರೆಗೆ ಅಜ್ಜಿ ಅಜ್ಜಂದಿರು ತಮ್ಮ ಮೊಮ್ಮಕ್ಕಳಿಗೆ ಹೇಳಬಹುದಾದ ಕಥೆಯಿದು. ಆ ಯಾನದ ಯಾತ್ರಿಗಳಾದ ನೀಲ್ ಆರ್ಮಸ್ಟ್ರಾಂಗ್, ಎಡ್ವಿನ್ ಆಲ್ಡ್ರೀನ್ ಮತ್ತು ಮೈಕಲ್ ಕಾಲಿನ್ಸ್‍ರು ಮಾತ್ರ ಹೆಮ್ಮೆಯಿಂದ ಹೇಳಬಹುದಾದ ಕಥೆಯಲ್ಲವಿದು. ಅಪೋಲೋ ವ್ಯೋಮ ಯೋಜನೆಯ ಆರಂಭದಲ್ಲೇ, ಅಂದರೆ  1967 ರ ಅಪೋಲೋ 1 ರ ಉಡ್ಡಯನದಲ್ಲಿಯೇ ವ್ಯೋಮಯಾನಿಗಳಾದ ಗ್ರಿಸಮ್, ವೈಟ್ ಮತ್ತು ರೋಜರ್ ಛಾಫೀ ಜೀವವನ್ನ  ಕಳೆದುಕೊಂಡಿದ್ದರು. ಅಪೊಲೋ 11 ರ ಕಮಾಂಡ್ ಮೊಡ್ಯೂಲ್ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಅಪೋಲೋ 8 ರಲ್ಲಿ ಅಂತದ್ದೇ ಕಮಾಂಡ್ ಮೊಡ್ಯೂಲನ್ನು ಭೂಮಿಯ ಸುತ್ತ ಸುತ್ತುವಂತೆ ಮಾಡಲಾಗಿತ್ತು. ಆ ನಂತರ ಅಪೋಲೋ 9 ರಲ್ಲಿ ಚಂದ್ರನ ಸುತ್ತ ಕಕ್ಷೆಯಲ್ಲಿ ಕಮಾಂಡ್ ಮಾಡ್ಯೂಲನ್ನು ಪರೀಕ್ಷಿಸಲಾಗಿತ್ತು. ಅಪೋಲೋ 10 ರಲ್ಲಿ ವ್ಯೋಮಯಾನಿಗಳ ಪೋಷಾಕುಗಳ ತಾಲೀಮು ನಡೆಯಿತು. ಹೀಗೆ, ಆ ಯಾನಕ್ಕಾಗಿ ಹತ್ತಿರ ಹತ್ತಿರ ನಾಲ್ಕು ಲಕ್ಷ ಜನ ದಶಕಗಳ ಕಾಲ ದುಡಿದ್ದಿದ್ದರು. ಜೀವ ತೇಯ್ದಿದ್ದರು. ಜೀವವನ್ನೇ ನೀಡಿದ್ದರು. ಅದಕ್ಕಿಂತಲೂ ಹೆಚ್ಚು ಜನ ಆ ಯಾನಕ್ಕಾಗಿ ಶುಭ ಹಾರೈಸಿದ್ದರು. ಇನ್ನೂ ಹೇಳಬೇಕೆಂದರೆ, ಮನುಷ್ಯನಾಗಿ ಹುಟ್ಟಿದ ಪ್ರತಿ ಜೀವಿಯೂ ತಮ್ಮ ಜೀವಿತದ ಒಂದಲ್ಲ ಒಂದು ಸಮಯದಲ್ಲಿ ಚಂದ್ರನ ನೆಲವನ್ನು ತಮ್ಮ ಬೆರಳುಗಳಲ್ಲಿ ಮುಟ್ಟಿ ಧನ್ಯವಾಗಬೇಕೆಂಬ ಕನಸು ಕಂಡವರೇ!
ಹಠ ಮಾಡುವ ಮಗುವಿಗೆ ಚಂದ್ರನನ್ನು ತೋರಿಸಿ ಆಸೆಕಂಗಳಲ್ಲಿರುವಾಗಲೇ ತುತ್ತು ತಿನ್ನಿಸಿ ಯಾಮಾರಿಸದ ಯಾವ ಅಮ್ಮ ಈ ಭೂಮಿಯ ಮೇಲೆದ್ದಾಳೆ ಹೇಳಿ?
ಚಂದ್ರ, ನಮ್ಮೆಲ್ಲರ ಮಹಾತ್ವಾಕಾಂಕ್ಷೆಯ ಸಂಕೇತ. ಆದುದರಿಂದಲೇ ಭೂಮಿಯ ಮೇಲಿನ ತಮ್ಮ ಶ್ರೇಷ್ಠತೆಯನ್ನು ಜಗತ್ತಿಗೆಲ್ಲಾ ಸಾರಲು ಅಮೇರಿಕನ್ನರು ಆರಿಸಿಕೊಂಡಿದ್ದು ಚಂದ್ರನನ್ನು. ಅಂತಹ ಚಂದ್ರನ ಮೇಲೆ ಮನುಷ್ಯ ಚೇತನವೊಂದು ಮೊದಲ ಹೆಜ್ಜೆಯನ್ನಿಟ್ಟ ಮಹತ್ವದ ಕ್ಷಣವನ್ನು ಮರೆಯಲಾದಿತೇ?

ಜುಲೈ 20, 1969 ಸಂಯೋಜಿತ ಸಾರ್ವತ್ರಿಕ ಕಾಲಮಾನ 20.17. ಚಂದ್ರನ ಮೇಲಿಳಿದ ಮೊದಲ ಮಾನವ ಎಂಬ ವಿಶೇಷಣದೊಂದಿಗೆ ಇತಿಹಾಸದ ಪುಟಗಳನ್ನು ಸೇರಿರುವ ನೀಲ್ ಆರ್ಮ್‍ಸ್ಟ್ರಾಂಗ್, ಅಪೋಲೋ-11 ಚಂದ್ರಯಾನ ಯೋಜನೆಯ ನಿಯಂತ್ರಣ ಕೇಂದ್ರಕ್ಕೆ "ಈಗಲ್ ಚಂದ್ರನ ಮೇಲಿಳಿದಿದೆ" ಎಂಬ ಸುದ್ದಿ ನೀಡಿದರು. ಚಂದ್ರನ ಮೇಲೆ ಮಾನವ ಇಳಿದ ಆ ಐತಿಹಾಸಿಕ ಸಂದರ್ಭಕ್ಕೆ ಈಗ ಐವತ್ತು ವರ್ಷಗಳು ಸಂದಿವೆ. ಅಪೋಲೋ 11ರ ಈಗಲ್ ಚಾಂದ್ರ ನೌಕೆ ಚಂದ್ರನ ಮೇಲಿಳಿದ ಒಂದು ದಿನದ ನಂತರ, ಜುಲೈ 21 ರಂದು ನೀಲ್ ಆರ್ಮಸ್ಟ್ರಾಂಗ್ ಚಂದ್ರನ ಮೇಲೆ ಮನುಷ್ಯನ ಮೊದಲ ಹೆಜ್ಜೆಯನ್ನಿಟ್ಟರು. ಚಂದ್ರನ ಮೇಲೆ ಇಳಿದ ಹತ್ತೊಂಬತ್ತು ನಿಮಿಷಗಳ ನಂತರ ಎಡ್ವಿನ್ ಅಲ್ಡ್ರಿನ್ ಕೂಡಾ ಚಂದ್ರನ ಮೇಲಿಳಿದರು. ಅವರಿಬ್ಬರೂ ಚಂದ್ರನ ನೆಲದ ಮೇಲೆ ಸುಮಾರು ಎರಡೂಕಾಲು ಗಂಟೆಗಳ ಕಾಲ ಓಡಾಡಿ ಸುಮಾರು ಇಪ್ಪತ್ತೊಂದು ಕಿಲೋಗ್ರಾಮಿನಷ್ಟು ವಸ್ತುಗಳನ್ನು ಚಂದ್ರ ಮೇಲ್ಮೈನಿಂದ ಸಂಗ್ರಹಿಸಿದರು. ಹೀಗೆ ಇವರಿಬ್ಬರೂ ಚಂದ್ರನ ಮೇಲೆ ಹೆಜ್ಜೆಗಳನ್ನಿಡುತ್ತಿರುವಾಗ ಇವರ ಜೊತೆ ಸಹಯಾನಿಯಾಗಿದ್ದ ಕಾಲಿನ್ಸ್ ಕಮಾಂಡ್ ಮಾಡ್ಯೂಲ್ ನಲ್ಲಿ ಚಂದ್ರನನ್ನು ಸುತ್ತುತ್ತಿದ್ದರು. ನೀಲ್ ಆರ್ಮಸ್ಟ್ರಾಂಗ್ ಚಂದ್ರನ ನೆಲದಿಂದಾಡಿದ ಮೊದಲ ಮಾತು ಚಂದ್ರ ಪಯಣದ ರೋಚಕ ಕಥೆಯನ್ನು ಒಂದೇ ವಾಕ್ಯದಲ್ಲಿ ಹಿಡಿದಿಟ್ಟಿತ್ತು-ಮಾನವನಿಗೆ ಒಂದು ಪುಟ್ಟ ಹೆಜ್ಜೆ, ಮನುಷ್ಯ ಕುಲದ ಧೈತ್ಯ ನೆಗೆತ.

ಅಮೇರಿಕಾದ ಫ್ಲೋರಿಡಾದಲ್ಲಿರುವ ಕೆನಡಿ ವ್ಯೋಮಕೇಂದ್ರದಿಂದ ಜುಲೈ 16 ರಂದು ಉಡ್ಡಯನಗೊಂಡ ಅಪೋಲೋ 11 ವ್ಯೋಮನೌಕೆಯು ತನ್ನ ರಾಕೆಟ್ಟಿನಿಂದ ಪ್ರತ್ಯೇಕಗೊಂಡು ಚಂದ್ರನ ಸುತ್ತ ಸೂಕ್ತ ಕಕ್ಷೆಯನ್ನು ಪಡೆಯುವ ಮೊದಲು ಮೂರು ದಿನಗಳ ಕಾಲ ಪ್ರಯಾಣಿಸುತ್ತಲೇ ಇತ್ತು. ಸೂಕ್ತ ಚಂದ್ರ ಕಕ್ಷೆಯನ್ನು ಪಡೆದ ನಂತರ ಕಮಾಂಡ್ ಮಾಡ್ಯೂಲ್‍ನಿಂದ ನೀಲ್ ಆರ್ಮ್‍ಸ್ಟ್ರಾಂಗ್ ಮತ್ತು ಎಡ್ವಿನ್ ಅಲ್ಡ್ರಿನ್‍ರು ಈಗಲ್ ಎಂಬ ಲೂನಾರ್ ಮಾಡ್ಯೂಲ್‍ಗೆ ವರ್ಗಾವಣೆಗೊಂಡರು. ಚಂದ್ರನ ಮೇಲಿರುವ ಟ್ರಾಂಕ್ವಿಲಿಟಿ ಸಮುದ್ರ ಎಂಬ ತಗ್ಗು ಪ್ರದೇಶವು ಈಗಲ್‍ನ ನೆಲಸ್ವರ್ಶಕ್ಕಾಗಿ ಆಯ್ಕೆಗೊಂಡಿತ್ತು. ನಿಯಂತ್ರಣ ನೌಕೆಯಲ್ಲಿ ಕಾಲಿನ್ಸ್ ಮಾತ್ರ ಉಳಿದರು. ಈಗಲ್‍ನಲ್ಲಿ ಆಲ್ಡ್ರೀನ್‍ಗೆ ತಾಂತ್ರಿಕ ನಿರ್ವಹಣೆಯ ಕೆಲಸ. ಜೊತೆಗೆ ಅವರು ಕೊಲಂಬಿಯಾದ ಮೂಲಕ ಹೌಸ್ಟನ್‍ನಲ್ಲಿರುವ ನಿಯಂತ್ರಣ ಕೇಂದ್ರದೊಂದಿಗೆ ಸತತ ಸಂಪರ್ಕದಲ್ಲಿರಬೇಕಾಗಿತ್ತು. ಚಂದ್ರನ ಮೇಲೆ ಮೊದಲ ಹೆಜ್ಜೆಯನ್ನಿಡುವ ವ್ಯಕ್ತಿಯೆಂದು ಈ ಮೊದಲೇ ನಿಶ್ಚಯಿಸಲಾದ ನೀಲ್ ಆರ್ಮಸ್ಟ್ರಾಂಗ್ ಈಗಲ್‍ನ ನೆಲಸ್ಪರ್ಶಕ್ಕೆ ಅಂತಿಮ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ನೆಲಸ್ಪರ್ಶಕ್ಕೆ ನಿರ್ದಿಷ್ಟ ಸ್ಥಳ ಮತ್ತು ಇಳಿಯುವ ಜವವನ್ನೂ (ಸ್ಪೀಡ್) ಅವರೇ ನಿರ್ಧರಿಸಬೇಕಾಗಿತ್ತು. ಚಂದ್ರನ ಮೇಲೆ ಎಲ್ಲಿ ನೋಡಿದರೂ ಬರೀ ಬಂಡೆಗಳು. ಕೆಲವಂತೂ ಆನೆಗಾತ್ರದ ಬಂಡೆಗಳು! ಎಲ್ಲಿ ಇಳಿಯಬೇಕೆಂದು ತೋಚದೆ ಆರ್ಮಸ್ಟ್ರಾಂಗ್ ಈಗಲ್‍ನ ಇಳಿಯುವಿಕೆಯನ್ನು ನಿಧಾನಗೊಳಿಸಿದರು. ಈಗಲ್ ಇಳಿಯಲು ವಿಳಂಬವಾಗುತ್ತಿದ್ದಂತೆ ಇತ್ತ ಭೂಮಿಯ ಮೇಲೆ ಆತಂಕ ಶುರುವಾಯಿತು. ಚಂದ್ರನಲ್ಲಿಳಿಯಲು ಮೀಸಲಿರಿಸಿದ್ದ ಇಂಧನ ಮುಗಿಯುತ್ತಾ ಬಂದಿತ್ತು. ಕೇವಲ ಅರವತ್ತು ಸೆಕೆಂಡ್‍ಗಳಿಗಾಗುವಷ್ಟು ಇಂಧನ ಉಳಿದಿದೆ ಎಂಬ ಮಾಹಿತಿ ನಿಯಂತ್ರಣ ಕೇಂದ್ರದಿಂದ ಬಂತಾದರೂ ಆಲ್ಡ್ರೀನ್ ಸಹನೆಯಿಂದಿದ್ದರು. ಅವರು ಆರ್ಮಸ್ಟ್ರಾಂಗ್‍ರನ್ನು ಗಾಬರಿಪಡಿಸುವಂತಿರಲಿಲ್ಲ. ಅಂತೂ, ಇಂಧನ ಮುಗಿಯಲು ಇನ್ನೇನು ಹದಿನೇಳು ಸೆಕೆಂಡುಗಳಿರುವಾಗ ಸುಮಾರಾಗಿ ಸಮತಟ್ಟಾಗಿರುವ, ಹೆಚ್ಚು ಬಂಡೆಗಳಿರದ ಸ್ಥಳದಲ್ಲಿ ಈಗಲ್ ನೆಲಸ್ಪರ್ಶಗೊಂಡಿತು.

1950 ರ ದಶಕವು ಶೀತಲ ಸಮರದ  ಕಾಲ. ಅಮೇರಿಕ ಮತ್ತು ಸೋವಿಯತ್ ರಷ್ಯಾ ದೇಶಗಳು ಒಂದಕ್ಕೊಂದು ಮೇಲಾಟದಲ್ಲಿ ತೊಡಗಿದ್ದವು. ವಿಚಿತ್ರವೆಂದರೆ, ಈ ದೇಶಗಳ ಶ್ರೇಷ್ಠತೆಯ ವ್ಯಸನ, ಯುದ್ಧೋನ್ಮಾದಗಳು ವ್ಯೋಮವಿಜ್ಞಾನದ ನೆಗೆತಕ್ಕೆ ಕಾರಣವಾಯಿತು. 1957 ರಲ್ಲೇ ಸೋವಿಯತ್ ರಷ್ಯಾವು ಕೃತಕ ಉಪಗ್ರಹ ಸ್ಪುಟ್ನಿಕ್ 1 ನ್ನು ಹಾರಿಬಿಟ್ಟು ವ್ಯೋಮ ವಿಜ್ಞಾನದಲ್ಲಿ ತಮ್ಮ ಶ್ರೇಷ್ಟತೆಯನ್ನು ಸಾಬೀತುಪಡಿಸಿತ್ತು. ಇದರೊಂದಿಗೆ ಖಂಡಾಂತರ ಕ್ಷಿಪಣ ಗಳ ಮೂಲಕ ಬೈಜಿಕ ಅಸ್ತ್ರಗಳನ್ನು ಗುರಿಗೆ ತಲುಪಿಸಬಲ್ಲ ತಮ್ಮ ತಾಕತ್ತನ್ನೂ ಜಗತ್ತಿಗೆ ಮನದಟ್ಟುಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನವು ನಾಸಾವನ್ನು ಸ್ಥಾಪಿಸಿತು. ನಾಸಾ ತನ್ನ ಮಕ್ರ್ಯುರಿ ಯೋಜನೆಯ ಮೂಲಕ ಭೂ ಕಕ್ಷೆಯಲ್ಲಿ ಮಾನವನನ್ನು ಸುತ್ತಿಸುವ ಉದ್ಧೇಶ ಹೊಂದಿತ್ತು. ಆದರೆ, 1961 ರಲ್ಲಿ ಸೋವಿಯತ್ ರಷ್ಯಾ ಈ ಸಾಧನೆಯನ್ನು ಮಾಡುವ ಮೂಲಕ ಯೂರಿ ಗಗಾರಿನ್ ವ್ಯೋಮಕ್ಕೆ ಹಾರಿದ ಮೊದಲ ಮಾನವನಾದರು.  ಅಮೇರಿಕಾ ಸಂಯುಕ್ತ ಸಂಸ್ಥಾನವು ವ್ಯೋಮ ವಿಜ್ಞಾನದಲ್ಲಿ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಲೇಬೇಕಾದ ಒತ್ತಡಕ್ಕೆ ಒಳಗಾಯಿತು.

"ಈ ದಶಕ ಮುಗಿಯುವುದರೊಳಗೆ ಚಂದ್ರನಲ್ಲಿಗೆ ಮನುಷ್ಯರನ್ನು ಕಳುಹಿಸಿ ಅವರನ್ನು ಸುರಕ್ಷಿತವಾಗಿ ಹಿಂತಿರುಗುವಂತೆ ಮಾಡುವ ಗುರಿಗೆ ಈ ದೇಶ ಬದ್ಧವಾಗಿದೆ" ಎಂದು 1961ರ ಮೇ 25 ರಂದು ಅಮೇರಿಕಾದ ಆಗಿನ ಅಧ್ಯಕ್ಷ ಜಾನ್ ಕೆನಡಿ ಹೇಳಿದರು. ಅಸಾಧ್ಯ ಒತ್ತಡಗಳನ್ನು ಮೆಟ್ಟಿ ನಿಂತು ಜಾನ್ ಕೆನಡಿಯವರು ಕರೆ ನೀಡಿದ ಎಂಟು ವರ್ಷ, ಒಂದು ತಿಂಗಳು ಮತ್ತು ಇಪ್ಪತ್ತೊಂಬತ್ತು ದಿನಗಳ ನಂತರ "ಗುರಿ ಈಡೇರಿದೆ" ಎಂಬ ಅಧಿಕೃತ ಘೋಷಣೆ ಹೌಸ್ಟನ್‍ನ ಅಪೋಲೋ 11 ರ ನಿಯಂತ್ರಣ ಕೇಂದ್ರದಿಂದ ಬಿತ್ತರಗೊಂಡಿತು.
ಅಪೋಲೋ 11 ರ ಸಾಧನೆ ಉಂಟುಮಾಡಿದ ಪರಿಣಾಮ ಬಹಳ ದೊಡ್ಡದು. ಈ ವ್ಯೋಮಸಾಹಸ ಜಗತ್ತನ್ನು ಒಂದಾಗಿಸಿತು. ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಮಾನವ ಪ್ರಯತ್ನದ ಮೇಲೆ ನಂಬಿಕೆ ಹೆಚ್ಚಿತು. ಮತ್ತಿಷ್ಟು ವ್ಯೋಮ ಕಾರ್ಯಕ್ರಮಗಳು ಮೊದಲಾಗುವಲ್ಲಿ ನೆರವಾಯಿತು. ಅದರ ಪರಿಣಾಮವಾಗಿ ಭೂ ಸ್ಥಿರ ಉಪಗ್ರಹಗಳು ಮಾಹಿತಿ ಕ್ರಾಂತಿಯನ್ನೇ ಉಂಟುಮಾಡಿದವು.

ವ್ಯೋಮ ಕಾರ್ಯಕ್ರಮಗಳು ಯುದ್ಧದ ಹೊಸ್ತಿನಿಂದ ಹುಟ್ಟಿದ್ದರೂ ಅಪೋಲೋ ವ್ಯೋಮಯಾನಿಗಳು ಗಡಿಗಳಿಲ್ಲದ ಭೂಮಿಯನ್ನು ಹಂಬಲಿಸಿದ್ದರು.
________________________
ಉದಯ ಗಾಂವಕಾರ

ಚಂದ್ರನಲ್ಲಿ ಮೊದಲ ಹೆಜ್ಜೆ

ಮನುಷ್ಯ ಕುಲದ ಧೈತ್ಯ ನೆಗೆತಕ್ಕೆ ಈಗ ಐವತ್ತು ವರ್ಷಗಳು. ನಂಬಿಕೆಗಳ ಪೆಟ್ಟಿಗೆಗೆ ಸುತ್ತಿಗೆಯ ಪೆಟ್ಟುಕೊಟ್ಟು, ಮಾನವ ಪ್ರಯತ್ನಕ್ಕೆ ಸಾಧ್ಯವಾಗದ್ದು ಯಾವುದೂ ಇಲ್ಲವೆಂಬ ಆತ್ಮವಿಶ್ವಾಸವನ್ನು ತುಂಬಿದ ಅಪೋಲೋ11 ಚಂದ್ರಯಾನದ ಕಥೆ ಬಹಳ ರೋಚಕ. ಬಹುಷಃ ಮುಂದಿನ ಎಷ್ಟೋ ತಲೆಮಾರುಗಳವರೆಗೆ ಅಜ್ಜಿ ಅಜ್ಜಂದಿರು ತಮ್ಮ ಮೊಮ್ಮಕ್ಕಳಿಗೆ ಹೇಳಬಹುದಾದ ಕಥೆಯಿದು. ಆ ಯಾನದ ಯಾತ್ರಿಗಳಾದ ನೀಲ್ ಆರ್ಮಸ್ಟ್ರಾಂಗ್, ಎಡ್ವಿನ್ ಆಲ್ಡ್ರೀನ್ ಮತ್ತು ಮೈಕಲ್ ಕಾಲಿನ್ಸ್‍ರು ಮಾತ್ರ ಹೆಮ್ಮೆಯಿಂದ ಹೇಳಬಹುದಾದ ಕಥೆಯಲ್ಲವಿದು. ಅಪೋಲೋ ವ್ಯೋಮ ಯೋಜನೆಯ ಆರಂಭದಲ್ಲೇ, ಅಂದರೆ  1967 ರ ಅಪೋಲೋ 1 ರ ಉಡ್ಡಯನದಲ್ಲಿಯೇ ವ್ಯೋಮಯಾನಿಗಳಾದ ಗ್ರಿಸಮ್, ವೈಟ್ ಮತ್ತು ರೋಜರ್ ಛಾಫೀ ಜೀವವನ್ನ  ಕಳೆದುಕೊಂಡಿದ್ದರು. ಅಪೊಲೋ 11 ರ ಕಮಾಂಡ್ ಮೊಡ್ಯೂಲ್ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಅಪೋಲೋ 8 ರಲ್ಲಿ ಅಂತದ್ದೇ ಕಮಾಂಡ್ ಮೊಡ್ಯೂಲನ್ನು ಭೂಮಿಯ ಸುತ್ತ ಸುತ್ತುವಂತೆ ಮಾಡಲಾಗಿತ್ತು. ಆ ನಂತರ ಅಪೋಲೋ 9 ರಲ್ಲಿ ಚಂದ್ರನ ಸುತ್ತ ಕಕ್ಷೆಯಲ್ಲಿ ಕಮಾಂಡ್ ಮಾಡ್ಯೂಲನ್ನು ಪರೀಕ್ಷಿಸಲಾಗಿತ್ತು. ಅಪೋಲೋ 10 ರಲ್ಲಿ ವ್ಯೋಮಯಾನಿಗಳ ಪೋಷಾಕುಗಳ ತಾಲೀಮು ನಡೆಯಿತು. ಹೀಗೆ, ಆ ಯಾನಕ್ಕಾಗಿ ಹತ್ತಿರ ಹತ್ತಿರ ನಾಲ್ಕು ಲಕ್ಷ ಜನ ದಶಕಗಳ ಕಾಲ ದುಡಿದ್ದಿದ್ದರು. ಜೀವ ತೇಯ್ದಿದ್ದರು. ಜೀವವನ್ನೇ ನೀಡಿದ್ದರು. ಅದಕ್ಕಿಂತಲೂ ಹೆಚ್ಚು ಜನ ಆ ಯಾನಕ್ಕಾಗಿ ಶುಭ ಹಾರೈಸಿದ್ದರು. ಇನ್ನೂ ಹೇಳಬೇಕೆಂದರೆ, ಮನುಷ್ಯನಾಗಿ ಹುಟ್ಟಿದ ಪ್ರತಿ ಜೀವಿಯೂ ತಮ್ಮ ಜೀವಿತದ ಒಂದಲ್ಲ ಒಂದು ಸಮಯದಲ್ಲಿ ಚಂದ್ರನ ನೆಲವನ್ನು ತಮ್ಮ ಬೆರಳುಗಳಲ್ಲಿ ಮುಟ್ಟಿ ಧನ್ಯವಾಗಬೇಕೆಂಬ ಕನಸು ಕಂಡವರೇ!
ಹಠ ಮಾಡುವ ಮಗುವಿಗೆ ಚಂದ್ರನನ್ನು ತೋರಿಸಿ ಆಸೆಕಂಗಳಲ್ಲಿರುವಾಗಲೇ ತುತ್ತು ತಿನ್ನಿಸಿ ಯಾಮಾರಿಸದ ಯಾವ ಅಮ್ಮ ಈ ಭೂಮಿಯ ಮೇಲೆದ್ದಾಳೆ ಹೇಳಿ?
ಚಂದ್ರ, ನಮ್ಮೆಲ್ಲರ ಮಹಾತ್ವಾಕಾಂಕ್ಷೆಯ ಸಂಕೇತ. ಆದುದರಿಂದಲೇ ಭೂಮಿಯ ಮೇಲಿನ ತಮ್ಮ ಶ್ರೇಷ್ಠತೆಯನ್ನು ಜಗತ್ತಿಗೆಲ್ಲಾ ಸಾರಲು ಅಮೇರಿಕನ್ನರು ಆರಿಸಿಕೊಂಡಿದ್ದು ಚಂದ್ರನನ್ನು. ಅಂತಹ ಚಂದ್ರನ ಮೇಲೆ ಮನುಷ್ಯ ಚೇತನವೊಂದು ಮೊದಲ ಹೆಜ್ಜೆಯನ್ನಿಟ್ಟ ಮಹತ್ವದ ಕ್ಷಣವನ್ನು ಮರೆಯಲಾದಿತೇ?

ಜುಲೈ 20, 1969 ಸಂಯೋಜಿತ ಸಾರ್ವತ್ರಿಕ ಕಾಲಮಾನ 20.17. ಚಂದ್ರನ ಮೇಲಿಳಿದ ಮೊದಲ ಮಾನವ ಎಂಬ ವಿಶೇಷಣದೊಂದಿಗೆ ಇತಿಹಾಸದ ಪುಟಗಳನ್ನು ಸೇರಿರುವ ನೀಲ್ ಆರ್ಮ್‍ಸ್ಟ್ರಾಂಗ್, ಅಪೋಲೋ-11 ಚಂದ್ರಯಾನ ಯೋಜನೆಯ ನಿಯಂತ್ರಣ ಕೇಂದ್ರಕ್ಕೆ "ಈಗಲ್ ಚಂದ್ರನ ಮೇಲಿಳಿದಿದೆ" ಎಂಬ ಸುದ್ದಿ ನೀಡಿದರು. ಚಂದ್ರನ ಮೇಲೆ ಮಾನವ ಇಳಿದ ಆ ಐತಿಹಾಸಿಕ ಸಂದರ್ಭಕ್ಕೆ ಈಗ ಐವತ್ತು ವರ್ಷಗಳು ಸಂದಿವೆ. ಅಪೋಲೋ 11ರ ಈಗಲ್ ಚಾಂದ್ರ ನೌಕೆ ಚಂದ್ರನ ಮೇಲಿಳಿದ ಒಂದು ದಿನದ ನಂತರ, ಜುಲೈ 21 ರಂದು ನೀಲ್ ಆರ್ಮಸ್ಟ್ರಾಂಗ್ ಚಂದ್ರನ ಮೇಲೆ ಮನುಷ್ಯನ ಮೊದಲ ಹೆಜ್ಜೆಯನ್ನಿಟ್ಟರು. ಚಂದ್ರನ ಮೇಲೆ ಇಳಿದ ಹತ್ತೊಂಬತ್ತು ನಿಮಿಷಗಳ ನಂತರ ಎಡ್ವಿನ್ ಅಲ್ಡ್ರಿನ್ ಕೂಡಾ ಚಂದ್ರನ ಮೇಲಿಳಿದರು. ಅವರಿಬ್ಬರೂ ಚಂದ್ರನ ನೆಲದ ಮೇಲೆ ಸುಮಾರು ಎರಡೂಕಾಲು ಗಂಟೆಗಳ ಕಾಲ ಓಡಾಡಿ ಸುಮಾರು ಇಪ್ಪತ್ತೊಂದು ಕಿಲೋಗ್ರಾಮಿನಷ್ಟು ವಸ್ತುಗಳನ್ನು ಚಂದ್ರ ಮೇಲ್ಮೈನಿಂದ ಸಂಗ್ರಹಿಸಿದರು. ಹೀಗೆ ಇವರಿಬ್ಬರೂ ಚಂದ್ರನ ಮೇಲೆ ಹೆಜ್ಜೆಗಳನ್ನಿಡುತ್ತಿರುವಾಗ ಇವರ ಜೊತೆ ಸಹಯಾನಿಯಾಗಿದ್ದ ಕಾಲಿನ್ಸ್ ಕಮಾಂಡ್ ಮಾಡ್ಯೂಲ್ ನಲ್ಲಿ ಚಂದ್ರನನ್ನು ಸುತ್ತುತ್ತಿದ್ದರು. ನೀಲ್ ಆರ್ಮಸ್ಟ್ರಾಂಗ್ ಚಂದ್ರನ ನೆಲದಿಂದಾಡಿದ ಮೊದಲ ಮಾತು ಚಂದ್ರ ಪಯಣದ ರೋಚಕ ಕಥೆಯನ್ನು ಒಂದೇ ವಾಕ್ಯದಲ್ಲಿ ಹಿಡಿದಿಟ್ಟಿತ್ತು-ಮಾನವನಿಗೆ ಒಂದು ಪುಟ್ಟ ಹೆಜ್ಜೆ, ಮನುಷ್ಯ ಕುಲದ ಧೈತ್ಯ ನೆಗೆತ.

ಅಮೇರಿಕಾದ ಫ್ಲೋರಿಡಾದಲ್ಲಿರುವ ಕೆನಡಿ ವ್ಯೋಮಕೇಂದ್ರದಿಂದ ಜುಲೈ 16 ರಂದು ಉಡ್ಡಯನಗೊಂಡ ಅಪೋಲೋ 11 ವ್ಯೋಮನೌಕೆಯು ತನ್ನ ರಾಕೆಟ್ಟಿನಿಂದ ಪ್ರತ್ಯೇಕಗೊಂಡು ಚಂದ್ರನ ಸುತ್ತ ಸೂಕ್ತ ಕಕ್ಷೆಯನ್ನು ಪಡೆಯುವ ಮೊದಲು ಮೂರು ದಿನಗಳ ಕಾಲ ಪ್ರಯಾಣಿಸುತ್ತಲೇ ಇತ್ತು. ಸೂಕ್ತ ಚಂದ್ರ ಕಕ್ಷೆಯನ್ನು ಪಡೆದ ನಂತರ ಕಮಾಂಡ್ ಮಾಡ್ಯೂಲ್‍ನಿಂದ ನೀಲ್ ಆರ್ಮ್‍ಸ್ಟ್ರಾಂಗ್ ಮತ್ತು ಎಡ್ವಿನ್ ಅಲ್ಡ್ರಿನ್‍ರು ಈಗಲ್ ಎಂಬ ಲೂನಾರ್ ಮಾಡ್ಯೂಲ್‍ಗೆ ವರ್ಗಾವಣೆಗೊಂಡರು. ಚಂದ್ರನ ಮೇಲಿರುವ ಟ್ರಾಂಕ್ವಿಲಿಟಿ ಸಮುದ್ರ ಎಂಬ ತಗ್ಗು ಪ್ರದೇಶವು ಈಗಲ್‍ನ ನೆಲಸ್ವರ್ಶಕ್ಕಾಗಿ ಆಯ್ಕೆಗೊಂಡಿತ್ತು. ನಿಯಂತ್ರಣ ನೌಕೆಯಲ್ಲಿ ಕಾಲಿನ್ಸ್ ಮಾತ್ರ ಉಳಿದರು. ಈಗಲ್‍ನಲ್ಲಿ ಆಲ್ಡ್ರೀನ್‍ಗೆ ತಾಂತ್ರಿಕ ನಿರ್ವಹಣೆಯ ಕೆಲಸ. ಜೊತೆಗೆ ಅವರು ಕೊಲಂಬಿಯಾದ ಮೂಲಕ ಹೌಸ್ಟನ್‍ನಲ್ಲಿರುವ ನಿಯಂತ್ರಣ ಕೇಂದ್ರದೊಂದಿಗೆ ಸತತ ಸಂಪರ್ಕದಲ್ಲಿರಬೇಕಾಗಿತ್ತು. ಚಂದ್ರನ ಮೇಲೆ ಮೊದಲ ಹೆಜ್ಜೆಯನ್ನಿಡುವ ವ್ಯಕ್ತಿಯೆಂದು ಈ ಮೊದಲೇ ನಿಶ್ಚಯಿಸಲಾದ ನೀಲ್ ಆರ್ಮಸ್ಟ್ರಾಂಗ್ ಈಗಲ್‍ನ ನೆಲಸ್ಪರ್ಶಕ್ಕೆ ಅಂತಿಮ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ನೆಲಸ್ಪರ್ಶಕ್ಕೆ ನಿರ್ದಿಷ್ಟ ಸ್ಥಳ ಮತ್ತು ಇಳಿಯುವ ಜವವನ್ನೂ (ಸ್ಪೀಡ್) ಅವರೇ ನಿರ್ಧರಿಸಬೇಕಾಗಿತ್ತು. ಚಂದ್ರನ ಮೇಲೆ ಎಲ್ಲಿ ನೋಡಿದರೂ ಬರೀ ಬಂಡೆಗಳು. ಕೆಲವಂತೂ ಆನೆಗಾತ್ರದ ಬಂಡೆಗಳು! ಎಲ್ಲಿ ಇಳಿಯಬೇಕೆಂದು ತೋಚದೆ ಆರ್ಮಸ್ಟ್ರಾಂಗ್ ಈಗಲ್‍ನ ಇಳಿಯುವಿಕೆಯನ್ನು ನಿಧಾನಗೊಳಿಸಿದರು. ಈಗಲ್ ಇಳಿಯಲು ವಿಳಂಬವಾಗುತ್ತಿದ್ದಂತೆ ಇತ್ತ ಭೂಮಿಯ ಮೇಲೆ ಆತಂಕ ಶುರುವಾಯಿತು. ಚಂದ್ರನಲ್ಲಿಳಿಯಲು ಮೀಸಲಿರಿಸಿದ್ದ ಇಂಧನ ಮುಗಿಯುತ್ತಾ ಬಂದಿತ್ತು. ಕೇವಲ ಅರವತ್ತು ಸೆಕೆಂಡ್‍ಗಳಿಗಾಗುವಷ್ಟು ಇಂಧನ ಉಳಿದಿದೆ ಎಂಬ ಮಾಹಿತಿ ನಿಯಂತ್ರಣ ಕೇಂದ್ರದಿಂದ ಬಂತಾದರೂ ಆಲ್ಡ್ರೀನ್ ಸಹನೆಯಿಂದಿದ್ದರು. ಅವರು ಆರ್ಮಸ್ಟ್ರಾಂಗ್‍ರನ್ನು ಗಾಬರಿಪಡಿಸುವಂತಿರಲಿಲ್ಲ. ಅಂತೂ, ಇಂಧನ ಮುಗಿಯಲು ಇನ್ನೇನು ಹದಿನೇಳು ಸೆಕೆಂಡುಗಳಿರುವಾಗ ಸುಮಾರಾಗಿ ಸಮತಟ್ಟಾಗಿರುವ, ಹೆಚ್ಚು ಬಂಡೆಗಳಿರದ ಸ್ಥಳದಲ್ಲಿ ಈಗಲ್ ನೆಲಸ್ಪರ್ಶಗೊಂಡಿತು.

1950 ರ ದಶಕವು ಶೀತಲ ಸಮರದ  ಕಾಲ. ಅಮೇರಿಕ ಮತ್ತು ಸೋವಿಯತ್ ರಷ್ಯಾ ದೇಶಗಳು ಒಂದಕ್ಕೊಂದು ಮೇಲಾಟದಲ್ಲಿ ತೊಡಗಿದ್ದವು. ವಿಚಿತ್ರವೆಂದರೆ, ಈ ದೇಶಗಳ ಶ್ರೇಷ್ಠತೆಯ ವ್ಯಸನ, ಯುದ್ಧೋನ್ಮಾದಗಳು ವ್ಯೋಮವಿಜ್ಞಾನದ ನೆಗೆತಕ್ಕೆ ಕಾರಣವಾಯಿತು. 1957 ರಲ್ಲೇ ಸೋವಿಯತ್ ರಷ್ಯಾವು ಕೃತಕ ಉಪಗ್ರಹ ಸ್ಪುಟ್ನಿಕ್ 1 ನ್ನು ಹಾರಿಬಿಟ್ಟು ವ್ಯೋಮ ವಿಜ್ಞಾನದಲ್ಲಿ ತಮ್ಮ ಶ್ರೇಷ್ಟತೆಯನ್ನು ಸಾಬೀತುಪಡಿಸಿತ್ತು. ಇದರೊಂದಿಗೆ ಖಂಡಾಂತರ ಕ್ಷಿಪಣ ಗಳ ಮೂಲಕ ಬೈಜಿಕ ಅಸ್ತ್ರಗಳನ್ನು ಗುರಿಗೆ ತಲುಪಿಸಬಲ್ಲ ತಮ್ಮ ತಾಕತ್ತನ್ನೂ ಜಗತ್ತಿಗೆ ಮನದಟ್ಟುಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನವು ನಾಸಾವನ್ನು ಸ್ಥಾಪಿಸಿತು. ನಾಸಾ ತನ್ನ ಮಕ್ರ್ಯುರಿ ಯೋಜನೆಯ ಮೂಲಕ ಭೂ ಕಕ್ಷೆಯಲ್ಲಿ ಮಾನವನನ್ನು ಸುತ್ತಿಸುವ ಉದ್ಧೇಶ ಹೊಂದಿತ್ತು. ಆದರೆ, 1961 ರಲ್ಲಿ ಸೋವಿಯತ್ ರಷ್ಯಾ ಈ ಸಾಧನೆಯನ್ನು ಮಾಡುವ ಮೂಲಕ ಯೂರಿ ಗಗಾರಿನ್ ವ್ಯೋಮಕ್ಕೆ ಹಾರಿದ ಮೊದಲ ಮಾನವನಾದರು.  ಅಮೇರಿಕಾ ಸಂಯುಕ್ತ ಸಂಸ್ಥಾನವು ವ್ಯೋಮ ವಿಜ್ಞಾನದಲ್ಲಿ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಲೇಬೇಕಾದ ಒತ್ತಡಕ್ಕೆ ಒಳಗಾಯಿತು.

"ಈ ದಶಕ ಮುಗಿಯುವುದರೊಳಗೆ ಚಂದ್ರನಲ್ಲಿಗೆ ಮನುಷ್ಯರನ್ನು ಕಳುಹಿಸಿ ಅವರನ್ನು ಸುರಕ್ಷಿತವಾಗಿ ಹಿಂತಿರುಗುವಂತೆ ಮಾಡುವ ಗುರಿಗೆ ಈ ದೇಶ ಬದ್ಧವಾಗಿದೆ" ಎಂದು 1961ರ ಮೇ 25 ರಂದು ಅಮೇರಿಕಾದ ಆಗಿನ ಅಧ್ಯಕ್ಷ ಜಾನ್ ಕೆನಡಿ ಹೇಳಿದರು. ಅಸಾಧ್ಯ ಒತ್ತಡಗಳನ್ನು ಮೆಟ್ಟಿ ನಿಂತು ಜಾನ್ ಕೆನಡಿಯವರು ಕರೆ ನೀಡಿದ ಎಂಟು ವರ್ಷ, ಒಂದು ತಿಂಗಳು ಮತ್ತು ಇಪ್ಪತ್ತೊಂಬತ್ತು ದಿನಗಳ ನಂತರ "ಗುರಿ ಈಡೇರಿದೆ" ಎಂಬ ಅಧಿಕೃತ ಘೋಷಣೆ ಹೌಸ್ಟನ್‍ನ ಅಪೋಲೋ 11 ರ ನಿಯಂತ್ರಣ ಕೇಂದ್ರದಿಂದ ಬಿತ್ತರಗೊಂಡಿತು.
ಅಪೋಲೋ 11 ರ ಸಾಧನೆ ಉಂಟುಮಾಡಿದ ಪರಿಣಾಮ ಬಹಳ ದೊಡ್ಡದು. ಈ ವ್ಯೋಮಸಾಹಸ ಜಗತ್ತನ್ನು ಒಂದಾಗಿಸಿತು. ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಮಾನವ ಪ್ರಯತ್ನದ ಮೇಲೆ ನಂಬಿಕೆ ಹೆಚ್ಚಿತು. ಮತ್ತಿಷ್ಟು ವ್ಯೋಮ ಕಾರ್ಯಕ್ರಮಗಳು ಮೊದಲಾಗುವಲ್ಲಿ ನೆರವಾಯಿತು. ಅದರ ಪರಿಣಾಮವಾಗಿ ಭೂ ಸ್ಥಿರ ಉಪಗ್ರಹಗಳು ಮಾಹಿತಿ ಕ್ರಾಂತಿಯನ್ನೇ ಉಂಟುಮಾಡಿದವು.

ವ್ಯೋಮ ಕಾರ್ಯಕ್ರಮಗಳು ಯುದ್ಧದ ಹೊಸ್ತಿನಿಂದ ಹುಟ್ಟಿದ್ದರೂ ಅಪೋಲೋ ವ್ಯೋಮಯಾನಿಗಳು ಗಡಿಗಳಿಲ್ಲದ ಭೂಮಿಯನ್ನು ಹಂಬಲಿಸಿದ್ದರು.
________________________
ಉದಯ ಗಾಂವಕಾರ

Thursday 21 March 2019

ನಮ್ಮ ಅಧಿಕಾರ ಚಲಾಯಿಸೋಣ ಮತ್ತು ನಮ್ಮ ಕರ್ತವ್ಯ ಮೆರೆಯೋಣ.

1
ಶ್ರೀ ಭಾಸ್ಕರ ಕೊಗ್ಗ ಕಾಮತರು ಸಾಂಪ್ರದಾಯಿಕ ಯಕ್ಷಗಾನ ಪದ್ಯದ ಮೂಲಕ ತಮ್ಮ ಯಕ್ಷಗಾನ ಗೊಂಬೆಗಳ ಕುಣಿತವನ್ನು ಮಾಡಿಸುತ್ತಾ ರಂಗಕ್ಕೆ ಆಗಮಿಸುವರು.
ವಿಡಿಯೋ ದೃಶ್ಯೀಕರಣ ಗೊಂಬೆಗಳನ್ನು ಕೇಂದ್ರೀಕರಿಸುವುದು. ನಿಧಾನವಾಗಿ ಇಡಿಯ ರಂಗಸ್ಥಳದ ನೋಟವನ್ನು ಒಳಗೊಳ್ಳುವುದು.
(30 ಸೆಕೆಂಡುಗಳವರೆಗೆ ಕುಣಿತ ಮುಂದುವರಿಯುವದು ಮತ್ತು ನಿಧಾನವಾಗಿ ಶ್ರೀ ಭಾಸ್ಕರ ಕೊಗ್ಗ ಕಾಮತರನ್ನು ಕೇಂದ್ರೀಕರಿಸುವುದು. ಹಿನ್ನೆಲೆ ಧ್ವನಿ ನಿಧಾನವಾಗಿ ಕುಂದುತ್ತಾ ಕುಣಿತದ ದೃಶ್ಯ ಮಾತ್ರ ಕಾಣಿಸುವುದು.)
ಹಿನ್ನೆಲೆಯಲ್ಲಿ ಭಾಸ್ಕರ ಕಾಮತರ ಪರಿಚಯ ನೀಡಲಾಗುವುದು-
ಶ್ರೀ ಭಾಸ್ಕರ ಕೊಗ್ಗ ಕಾಮತ್. ಉಪ್ಪಿಕುದ್ರು ಯಕ್ಷಗಾನ ಗೊಂಬೆಯಾಟದ ಪರಂಪರೆಯನ್ನು ಇಂದಿಗೂ ಜೀವಂತವಾಗಿಟ್ಟುಕೊಂಡಿರುವ ಸಾಧಕ. ತನ್ನ ಗೊಂಬೆಗಳ ಜೊತೆ ದೇಶ ವಿದೇಶಗಳನ್ನು ಸುತ್ತಿರುವ ಕಾಮತರು ಕುಂದಾಪುರ ತಾಲೂಕಿನ ಉಪ್ಪಿನಕುದ್ರುವಿನಲ್ಲಿ ಗೊಂಬೆಮನೆ ಎಂಬ ಗೊಂಬೆಯಾಟದ ಶಾಲೆಯನ್ನು ನಡೆಸುತ್ತಿರುವರು.
ನಿಧಾನವಾಗಿ ಭಾಸ್ಕರ ಕಾಮತರು ಕ್ಲೋಸ್ ಅಪ್ ನಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುವರು ಮತ್ತು ಸ್ವೀಪ್ ಸಂದೇಶವನ್ನು ನೀಡುವರು)
-
ನಮಸ್ಕಾರ
ಮತದಾನವು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ. ಮತದಾನದಲ್ಲಿ ಭಾಗಿಯಾಗದೆ ಇರುವುದು ನಮ್ಮನ್ನೇ ನಾವು ವಂಚಿಸಿದ ಹಾಗೆ. ಪ್ರಜಾಪ್ರಭುತ್ವದ ಹಬ್ಬವಾದ ಮತದಾನದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ. ನಮ್ಮ ಅಧಿಕಾರ ಚಲಾಯಿಸೋಣ ಮತ್ತು ನಮ್ಮ ಕರ್ತವ್ಯ ಮೆರೆಯೋಣ. ಪ್ರಜಾಪ್ರಭುತ್ವವನ್ನು ಅರ್ಥಪೂರ್ಣಗೊಳಿಸೋಣ.
(ಚುನಾವಣಾ ದಿನಾಂಕ, ಸಮಯ ಮತ್ತು ಸ್ವೀಪ್ ಲೋಗೋ, ಚುನಾವಣಾ ಆಯೋಗದ ವೆಬ್ ವಿಳಾಸ ತೆರೆಯ ಮೇಲೆ ಮೂಡುವುದು.)
_____________________________________________________________________________________
ಕಾಡಿನ ರಾಜ ಸಿಂಹದ ರಾಜಸಭೆ- ಒಡ್ಡೋಲಗದ ಮೂಲಕ ಆರಂಭವಾಗುವುದು.
ಹಸಿರ ಸಿರಿ ಕಾಡಿಗೆ ಕೈಮುಗಿದು
ಬಂದನಾ ಸಿಂಹರಾಜನು
ಘನ ಗಾಂಭೀರ್ಯದಲಿ
ಪೂರ್ವದಿಂ ಪಶ್ಚಿಮಕೆ
ಉತ್ತರಾಧಿ ದಕ್ಷಿಣಕೆ
ಹಬ್ಬಿದಾ ಮಲೆ, ಕಡು ಕಾಡಿನೊಳಗೆ
ಜೀವಿಪ ಮೃಗ ಖಗಗಳೆಲ್ಲ
ಬಂದು ಸೇರಿದವು ಸಿಂಹ ದುರ್ಗದಲಿ||

ಪ್ರಾಣಿಗಳು: ಮಹಾರಾಜರಿಗೆ ಜಯವಾಗಲಿ|
ರಾಜ(ಸಿಂಹ): ಎಲ್ಲರಿಗೂ ವಂದನೆಗಳು. ನೀವೆಲ್ಲರೂ ಸೇರಿ ನನ್ನ ಮೇಲೆ ನಂಬಿಕೆಯಿಟ್ಟು ಕಾಡಿನ ರಾಜನನ್ನಾಗಿ ಆರಿಸಿ ಆರಿಸಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದಗಳು.
ಎಲ್ಲ ಪ್ರಾಣಿಗಳು: ನೀವು ಆ ಹುದ್ದೆಗೆ ಅರ್ಹರು ಮಹಾಸ್ವಾಮಿ.
ರಾಜ: ಮತ್ತೊಮ್ಮೆ ನಿಮಗೆಲ್ಲ ಧನ್ಯವಾದಗಳು. (ಮಂತ್ರ್ರಿಗಳ ಕಡೆ ತಿರುಗಿ) ಮಂತ್ರಿಗಳೇ ಏನಾದರೂ ವಿಶೇಷ ಘಟನೆಗಳು ವರದಿಯಾಗಿವೆಯೇ?
ಮಂತಿ(ಆಮೆ)್ರ: ಹೌದು ಸ್ವಾಮಿ. ಒಂದು ವಿಶೇಷ ಸುದ್ದಿಯನ್ನು ನಮ್ಮ ಧೂತನು ನಾಡಿನಿಂದ ತಂದಿರುವನು. ಅವನ ಮುಖದಿಂದಲೇ ಆ ಸುದ್ದಿಯನ್ನು ತಾವು ಕೇಳುವಂತವರಾಗಿ.
ರಾಜ: ಕರೆಯಿರಿ ಆ ಧೂತನನ್ನು..
ಧೂತ(ಕುದುರೆ): ಸ್ವಾಮಿ, ಸುದ್ದಿ ತಂದಿರುವೆ
ಪದ್ಯ:
ಸುದ್ದಿ ತಂದಿರುವೆ ನಾನು ಸ್ವಾಮಿದೇವಾ
ಸುದ್ದಿ ತಂದಿರುವೆ ಧಣಿಯೇ ಸ್ವಾಮಿದೇವಾ || ಪ ||
ಕಾಡಿಗೆಲ್ಲ ಹೇಳಲೆಂದು
ನಾಡಿನಿಂದ ಓಡಿಬಂದು
ಬೀಡುಗಳನು ಗೋಡೆಗಳನು
ದಾಟಿ ಬಂದೆ ಸ್ವಾಮಿ
ಸುದ್ದಿ ತಂದಿರುವೆ ನಾನು ಸ್ವಾಮಿದೇವಾ
ಸುದ್ದಿ ತಂದಿರುವೆ ಧಣಿಯೇ ಸ್ವಾಮಿದೇವಾ || ಪ ||
ನಾಡ ಜನರ ಹಬ್ಬವಂತೆ
ಪ್ರತಿನಿಧಿಯ ಆಯ್ಕೆಯಂತೆ
ತಮ್ಮ ಕನಸು, ತಮ್ಮ ಯೋಚನೆ
ತಾವೇ ನನಸು ಮಾಡ್ತಾರಂತೆ
ಸುದ್ದಿ ತಂದಿರುವೆ ನಾನು ಸ್ವಾಮಿದೇವಾ
ಸುದ್ದಿ ತಂದಿರುವೆ ಧಣಿಯೇ ಸ್ವಾಮಿದೇವಾ || ಪ ||
ಧೂತ: ಸ್ವಾಮಿ, ನಾಡಿನಲ್ಲಿ ಚುನಾವಣೆ ಬರ್ತಿದಿಯಂತೆ, ಜನರು ತಮ್ಮ ಮತವನ್ನು ಹಾಕುವ ಮೂಲಕ ತಮ್ಮ ಪ್ರತಿನಿಧಿಯನ್ನು ಆರಿಸುವರಂತೆ.
ರಾಜ: ಓಹೋ ಇದು ಶುಭ ವಿಚಾರ. ನಮ್ಮ ಸಂದೇಶವನ್ನು ನಾಡಿನ ಜನರಿಗೆಲ್ಲ ತಲುಪಿಸಿ.
     ಈ ಚುನಾವಣೆ ಅರ್ಥಪೂರ್ಣವಾಗಬೇಕಾದರೆ ನಾಡಿನ ಎಲ್ಲ ಅರ್ಹ ಮತದಾರರೂ ಮತ ಚಲಾಯಿಸಬೇಕು. ಮತಚಲಾಯಿಸುವಾಗ ಹಣ, ಜಾತಿ, ಭಾಷೆ, ಧರ್ಮ ಮತ್ತಿತರ ಪ್ರಲೋಭನೆಗೆ ಒಳಗಾಗಬಾರದು. ಮತದಾನ ಎಲ್ಲ ಪ್ರಜೆಗಳ ಪವಿತ್ರವಾದ ಕರ್ತವ್ಯ
ಸರ್ವರಿಗೂ ಸನ್ಮಂಗಳವಾಗಲಿ!
(ಚುನಾವಣಾ ದಿನಾಂಕ, ಸಮಯ ಮತ್ತು ಸ್ವೀಪ್ ಲೋಗೋ, ಚುನಾವಣಾ ಆಯೋಗದ ವೆಬ್ ವಿಳಾಸ ತೆರೆಯ ಮೇಲೆ ಮೂಡುವುದು.)

3
ಇಂಡಿಯನ್ ಪಪೆಟ್ ಹಾಡುತ್ತಾ ಕುಣಿಯುತ್ತಾ ರಸ್ತೆಯ ಮೇಲೆ ಬರುತ್ತಿದೆ.  ರಸ್ತೆಯಲ್ಲಿ ಕುದುರೆ ಸವಾರ ಎದುರಾಗುತ್ತಾನೆ.
ಸವಾರ: ಎಂಥಾ ಹಾಳ್ಬಿದ್ ರಸ್ತೆ ಮಾರಾಯ್ತಿ...ಹೊಂಡ ಬಿಟ್ರೆ ಬೇರೆಂಥಾ ಇಲ್ಲಾ..
(ಇಂಡಿಯನ್ ಪಪೆಟ್ ಮತ್ತೆ ಕುಣಿಯುವುದು)
ಸವಾರ: ಅಷ್ಟಪ ಟ್ಯಾಕ್ಸ್ ತಕಂತ್ರ..ರಸ್ತೆ ಸಮಾ ಮಾಡುಕೆ ಧಾಡಿ...
(ಇಂಡಿಯನ್ ಪಪೆಟ್ ಮತ್ತೆ ಕುಣಿಯುವುದು)
ಸವಾರ: ನೀರಿಲ್ಲ, ಕರೆಂಟಿಲ್ಲ, ಬಸ್ ಇಲ್ಲ...ಯಾವ್ದೂ ಸಮಾ ಇಲ್ಲ... ಇವ್ರು ಏನೂ ಮಾಡ್ತಿಲ್ಲ...
(ಇಂಡಿಯನ್ ಪಪೆಟ್ ಮತ್ತೆ ಕುಣಿಯುವುದನ್ನು ನಿಲ್ಲಿಸುವುದು)
ಇಂಡಿಯನ್ ಪಪೆಟ್ : ದೂರುವುದನ್ನು ನಿಲ್ಲಿಸು. ನೀನು, ನಿನ್ನ ಕರ್ತವ್ಯ ಮಾಡಿದ್ದೀಯಾ?
ಸವಾರ: ಎಂಥ ಕರ್ತವ್ಯ?
ಇಂಡಿಯನ್ ಪಪೆಟ್ : ಕಳೆದ ಚುನಾವಣೆಯಲ್ಲಿ ನೀನು ಮತ ಚಲಾಯಿಸಿದ್ದೀಯಾ?
ಸವಾರ: (ಇಲ್ಲ ಎಂಬಂತೆ ತಲೆಯಲ್ಲಾಡಿಸುವನು..)
ಇಂಡಿಯನ್ ಪಪೆಟ್ : ಈ ಬಾರಿ ಮತ ಚಲಾಯಿಸು. ನಿನ್ನ ಕರ್ತವ್ಯ ನಿಭಾಯಿಸು. ಮತದಾನವು ಪ್ರತಿಯೊಬ್ಬ ನಾಗರೀಕನ ಪವಿತ್ರ ಹೊಣೆಗಾರಿಕೆ.
(ಚುನಾವಣಾ ದಿನಾಂಕ, ಸಮಯ ಮತ್ತು ಸ್ವೀಪ್ ಲೋಗೋ, ಚುನಾವಣಾ ಆಯೋಗದ ವೆಬ್ ವಿಳಾಸ ತೆರೆಯ ಮೇಲೆ ಮೂಡುವುದು.)





Tuesday 8 January 2019

ಸಹೃದಯರು ಕಂಡಂತೆ ಬೆರಳುಗಳು


ಕತೆ: ಬೆರಳುಗಳು- ಉದಯ ಗಾಂವಕಾರ

ಟ್ರೋಮಾ, ಎಮೆರ್ಜೆನ್ಸಿ, ಕ್ಯಾಸುವಾಲ್ಟಿ ಎಂದು ಬೇರೆ ಬೇರೆ ಬೋರ್ಡಿನಲ್ಲಿ ನೇತುಬಿದ್ದಿರುವ ಪದಗಳು ಒಂದೇ ಅರ್ಥದವೋ ಅಥವಾ ಅವುಗಳ ನಡುವೆ ಅರ್ಥವ್ಯತ್ಯಾಸಗಳು ಇವೆಯೋ ಎಂಬುದನ್ನು ನಿಘಂಟು ನೋಡಿ ತಿಳಿದುಕೊಳ್ಳಬೇಕು ಎಂದು ಹಿಂದೆ ಎಂದೋ ಇಲ್ಲಿಗೆ ಬಂದಾಗ ಅಂದುಕೊಂಡದ್ದು ಮತ್ತೆ ನೆನಪಾಯಿತು. ಈಗ ಆರು ದಿನಗಳಿಂದ ಇವೇ ಬೋರ್ಡುಗಳನ್ನು ಅವಶ್ಯಕತೆ ಇಲ್ಲದೆಯೂ ಓದಿಕೊಳ್ಳುತ್ತಾ, ಅಮ್ಮ ಇರುವ ಐ.ಸಿ.ಯು ಗೆ ಹೋಗಿಬರುತ್ತಿದ್ದೇನೆ. ಎಚ್ಚರವಿರುತ್ತಿದ್ದರೆ ಐ.ಸಿ.ಯು ಎಂದರೆ ಇದಾ ಎಂದು ಅಮ್ಮ ಉದ್ಘಾರ ತೆಗೆಯುತ್ತಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಇರಬೇಕು, ಈಗ ಕರಡಿ ನಾಗಪ್ಪ ಎಂದು ಕರೆಯಿಸಿಕೊಳ್ಳುವ ಹಳೆಮನೆ ನಾಗಪ್ಪನ ಮೇಲೆ ಕರಡಿಯೊಂದು ದಾಳಿ ಮಾಡಿದ್ದರಿಂದ ಮೈಯೆಲ್ಲ ಗಾಯಗಳಾಗಿ ರಕ್ತಸ್ರಾವದಿಂದ ಬದುಕು-ಸಾವಿನ ನಡುವೆ ಏಗುತ್ತಿರುವ ಸ್ಥಿತಿಯಲ್ಲೇ ಆತನನ್ನು ಇದೇ ಆಸ್ಪತ್ರೆಗೆ ಸೇರಿಸಲಾಗಿತ್ತು. ವಾರದ ನಂತರ ಊರಿಗೆ ಬಂದವರೊಬ್ಬರು ನಾಗಪ್ಪನನ್ನು ಐ.ಸಿ.ಯು ನಲ್ಲಿಟ್ಟಿದ್ದಾರೆಂದು ಹೇಳಿದ್ದನ್ನು ಅಮ್ಮ ಐಸಿನಲ್ಲಿ ಎಂದು ತಪ್ಪಾಗಿ ಕೇಳಿಸಿಕೊಂಡಿರಬೇಕು- ತಪ್ಪಾಗಿ ಏನು, ನಾವು ಕೇಳಿಸಿಕೊಳ್ಳುವುದು ನಮಗೆ ಅರ್ಥವಾಗುವುದನ್ನು ಮಾತ್ರವೇ ಅಲ್ಲವೆ? ಹೆಣ ಕೊಳೆಯಬಾರದು ಎಂದು ನಾಗಪ್ಪನನ್ನು ಐಸಿನಲ್ಲಿಟ್ಟಿದ್ದಾರೆಂದು ಅಮ್ಮ ನನ್ನಲ್ಲಿ ಹೇಳಿದ್ದಲ್ಲದೆ, ಆತನ ಅಕಾಲ ಸಾವಿನ ಬಗ್ಗೆ ತುಂಬಾ ವ್ಯಥೆ ಪಟ್ಟುಕೊಂಡಿದ್ದಳು. ನಾಗಪ್ಪ ಗುಣಮುಖನಾಗಿ ವಾಪಸು ಬಂದಾಗ ನಾನೂ ಅಮ್ಮನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದ್ದೆ. ಆನಂತರ ಎಷ್ಟೋ ವರ್ಷಗಳ ಬಳಿಕ ನನಗೆ ಅದು ಐ.ಸಿ.ಯು ಆಗಿತ್ತು ಎಂಬುದು ಗೊತ್ತಾಯಿತು. ಅಮ್ಮಗೆ ಗೊತ್ತಾಗಿತ್ತೋ ಇಲ್ಲವೋ?.....
ಬೆರಳುಗಳು ಕತೆ  ಓದಲು ಇಲ್ಲಿ ಕ್ಲಿಕ್ಕಿಸಿ


ಗೆಳೆಯ ಉದಯ ಗಾಂವಕಾರ ರವರ ಹೊಸ ಕಥೆ...ಬೆರಳುಗಳು ಓದಿದ ನಂತರ ಅನಿಸಿದ್ದು..


    ಐಸಿಯುನಲ್ಲಿ ಸೇರಿಸಲಾದ ಅಮ್ಮನನ್ನು ನೋಡಿಕೊಳ್ಳುತ್ತಿದ್ದ ಕಥಾನಾಯಕನ ಸುತ್ತ ಹೆಣೆದ  ಕಥೆಯಲ್ಲಿ ತಾಯಿ ಮಕ್ಕಳ ಸಂಬಂಧಗಳನ್ನು ವಿಶ್ಲೇಷಣೆ ನಡೆಸುವ ಪ್ರಾಮಾಣಿಕ ಪ್ರಯತ್ನವೊಂದನ್ನು ನಡೆಸಲಾಗಿದೆಮದುವೆಯಾದ ಗಂಡು ಮಕ್ಕಳೊಂದಿಗೆ ವಯಸ್ಸಾದ ಅಮ್ಮನ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಗೆ ಒಳಪಡುವ ಸಂದರ್ಭದಲ್ಲಿ ಈ ಕತೆ ತೆರೆಯುವ ಮಗ್ಗಲುಗಳು ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತವೆಹೆಣ್ಣುಮಕ್ಕಳೊಂದಿಗಿನ ತಾಯಿಯ ಸಂಬಂಧವನ್ನು 
ಸಹ ಇಲ್ಲಿ ಅವಲೋಕಿಸಲಾಗಿದೆ.
     ಐಸಿಯುನಲ್ಲಿ ಸೇರಿಸಲಾದ ಅಮ್ಮನ ಬಗ್ಗೆ ಹೆಚ್ಚಿನ ಕಾಳಜಿವಹಿಸುವ ಕಥಾನಾಯಕನ ಅಣ್ಣನಿಗೆ ಸಂಬಂಧ ವ್ಯಾವಹಾರಿಕವಾಗಿ ಕಾಣುತ್ತದೆಅಮ್ಮನನ್ನು ತಮ್ಮನ ಮನೆಯಲ್ಲೇ ಬಿಡಬೇಕೆನ್ನುವ ಅನಿವಾರ್ಯತೆ..."ಒಬ್ಬಳನ್ನು ಕೆಲಸದವಳನ್ನು ಹುಡುಕು...ನಾನೇ ಅವಳ ಸಂಬಳ ಕೊಡುವೆ", ಎನ್ನುವ ಮಾತಿನ ಮೂಲಕ ಗುರ್ತಿಸಲಾಗಿದೆಅಣ್ಣ-ತಮ್ಮಂದಿರ ಮಡದಿಯರು ಗಂಡಂದಿರ ತಾಯಿಯ ಬಗ್ಗೆ ಇಟ್ಟುಕೊಂಡಿರುವ ಸಂಬಂಧಗಳ ಬಗ್ಗೆಯೂ ಇಲ್ಲಿ ವಿಮರ್ಶಿಸಿರುತ್ತಾರೆ..(ಎರಡು ದಿನ ನೋಡಿದರೆ ಏನೂ ಗೊತ್ತಾಗುವುದಿಲ್ಲ ಭಾವಾ ಒಂದು ತಿಂಗಳು ಅತ್ತೆಯನ್ನು ಮನೆಯಲ್ಲಿ ಇಟ್ಟುಕೊಳ್ಳಿ ....ನಿಮಗೇ ತಿಳಿಯುತ್ತದೆ.)
    ಸಿಕ್ವೇರಾ ಎನ್ನುವ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ ಇಲ್ಲಿ ಒಬ್ಬ ವಿಚಿತ್ರ ಸ್ವಭಾವದ ಒಂದು ಪಾತ್ರತಾಯಿಯನ್ನು ಅತಿಯಾಗಿ ನಂಬುವ ಆತ ತಮ್ಮನ ಹೆಂಡತಿಯನ್ನು ಅನುಮಾನಿಸಿ ತನ್ನ ಮನೆ ಬಾಗಿಲಿಗೆ ಬೀಗ ಹಾಕಿಕುತೂಹಲ ಹುಟ್ಟಿಸುವ ಕಥನ ಸಂದರ್ಭವನ್ನು ಕಥೆಗಾರರು ಬಹಳ ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ...(ಆರಂಭದ ಕೆಲ ಪುಟಗಳು ಕಿತ್ತುಹೋಗಿರುವ ಪತ್ತೆದಾರಿ ಕಾದಂಬರಿಯನ್ನು ಓದುತ್ತಿರುವಂತೆ....)
    ಮತ್ತೊಂದು ಚಿತ್ರಣಪಕ್ಕದ ಬೆಡ್ಡಿನ ಸರೋಜಳ ಅಮ್ಮನ ಬೆರಳುಗಳ ಚಲನೆಯನ್ನು (ಬಹುಷಃ ಬೆರಳಿನ ಚಲನೆಯೆನ್ನುವುದು ಭ್ರಮೆಯದ್ದಾಗಿರಬಹುದು...)  ಬಹಳ ಗಂಭೀರವಾಗಿ ಪರಿಗಣಿಸಿ ಕಥಾನಾಯಕನ ಗಮನ ಸೆಳೆಯುವಾಗ ಅಮ್ಮನ ಆರೋಗ್ಯದ ಬಗ್ಗೆ ಮಗಳಿಗಿರುವ ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕು..(ಇಲ್ನೋಡಿ ಅಣ್ಣ....ನಾನು ಅಮ್ಮಾ ಎಂದಾಗ ಅಮ್ಮ ಹೇಗೆ ಬೆರಳು ಅಲ್ಲಾಡಿಸಿದರು...) ನಂತರ ಕಥಾನಾಯಕ ತನ್ನ ತಾಯಿಯ ಬೆರಳಿನ ಕಡೆಗೆ ನೋಡಿ ಅಸಹಾಯಕನಾಗುತ್ತಾನೆ
     ಇಲ್ಲಿ ಮೂರು ಸಂದರ್ಭಗಳನ್ನು ಸೃಷ್ಟಿಸಿ ತಾಯಿ ಮಕ್ಕಳ ಸಂಬಂಧಗಳನ್ನು ಪ್ರಾಮಾಣಿಕವಾಗಿ ವಿಶ್ಲೇಷಣೆ ನಡೆಸಿದ್ದಾರೆಅದುವೇ ಬಹಳ ಪ್ರಮುಖ ವಿಷಯ ಹಾಗೂ ಕಥಾವಸ್ತು...ಅಲ್ಲದೆ ಕುತೂಹಲ ಪ್ರತಿ ಘಟ್ಟದಲ್ಲೂ ಮುನ್ನುಗ್ಗುತ್ತಿರುವಾಗ ಇದ್ದಕ್ಕಿದ್ದಂತೆ ಕಥೆಯನ್ನು ಸಿಕ್ವೇರಾನ ಒಂದು ಕುತೂಹಲದ ಮಾತಿನೊಂದಿಗೆ ಅಂತ್ಯಗೊಳಿಸಿ ಮುಗ್ಗರಿಸುವಂತೆ ಮಾಡಿದ ಕಥೆಗಾರರ ತಂತ್ರಗಾರಿಕೆ ಮೆಚ್ಚುವಂತಹದ್ದುಅಲ್ಲದೆ ಸಿಕ್ವೇರಾನ ಮಾನಸಿಕ ಅಸ್ವಸ್ಥತೆಯನ್ನು ಅನಾವರಣಗೊಳಿಸುವ ಪರಿ ಓದುಗರ ಅನುಕಂಪವನ್ನು ಪಡೆಯುತ್ತದೆಭಾಷಾ ಪ್ರಯೋಗದ ಚತುರತೆಯಿಂದಾಗಿ ಕಥೆ ಬಹಳ ಆಪ್ಯಾಯಮಾನವಾಗಿಸಿ 
ಓದುಗರ ಅಂತರಂಗವನ್ನು ಕಲಕಿಬಿಡುತ್ತದೆ..
ಪಾತ್ರಗಳನ್ನು ಕಪ್ಪು ಬಿಳುಪಿನಲ್ಲಿ ಕಟ್ಟದೇ ಓದುಗರು ಹೊಸದೇ ಆದ ಕತೆಯನ್ನು ರೂಪಿಸಿಕೊಳ್ಳುವಂತೆ ಮತ್ತು ಸಂದರ್ಭವನ್ನು ಬೇರೆ ಕಣ್ಣುಗಳಿಂದ ನೋಡಲು ಅನುವು ಮಾಡಿಕೊಡುವ ನಿರೂಪಣೆ ಕತೆಗೆ ಪ್ರತಿ ಓದಿನಲ್ಲೂ ವಿಭಿನ್ನ ಆಯಾಮವನ್ನು ನೀಡುತ್ತದೆ.

ಪಾತ್ರಗಳನ್ನು ಕಪ್ಪು ಬಿಳುಪಿನಲ್ಲಿ ಕಟ್ಟದೇ ಓದುಗರು ಹೊಸದೇ ಆದ ಕತೆಯನ್ನು ರೂಪಿಸಿಕೊಳ್ಳುವಂತೆ ಮತ್ತು ಸಂದರ್ಭವನ್ನು ಬೇರೆ ಕಣ್ಣುಗಳಿಂದ ನೋಡಲು ಅನುವು ಮಾಡಿಕೊಡುವ ನಿರೂಪಣೆ ಕತೆಗೆ ಪ್ರತಿ ಓದಿನಲ್ಲೂ ವಿಭಿನ್ನ ಆಯಾಮವನ್ನು ನೀಡುತ್ತದೆ.
ಕತೆಗಾರ ಗೆಳೆಯ ಉದಯ ಗಾಂವಕಾರರವರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದು ಎನ್ನುವುದನ್ನೀಗ ಖಾತ್ರಿಗೊಳಿಸಿದ್ದಾರೆ.


ವಿಚಿತ್ರ ತಲ್ಲಣವನ್ನು ಹುಟ್ಟುಹಾಕಿದ ಕಥೆ: ಸುಧಾ ಹೆಗಡೆ 

ಕಥೆ ಪೂರ್ತಿಯಾಗಿ ಅರ್ಥವಾಯಿತು ಎನ್ನಲಾರೆ, ಹಾಗಾಗಲು ಸಾಧ್ಯವೂ ಇಲ್ಲ, ಹಾಗಾಗಬಾರದು ಕೂಡ. ಆದರೆ ಓದಿನ ನಂತರ ಅದೊಂದು ವಿಚಿತ್ರ ತಲ್ಲಣವನ್ನು ನನ್ನೊಳಗೆ ಹುಟ್ಟುಹಾಕಿದೆ ಮತ್ತು ಅದು ಶಬ್ದಗಳಿಗೆ ನಿಲುಕದ್ದು. ಪಾತ್ರಗಳ ಮನಸ್ಸಿನೊಳಗೆ ಅವರನ್ನು ಅತಿಕ್ರಮಿಸದೇ ಪ್ರವೇಶಿಸುವ ನಿಮ್ಮ ಸೂಕ್ಷ್ಮತೆ ಬಹಳ ಇಷ್ಟವಾಯಿತು. ಕಥೆಗಳನ್ನು ಬರೆಯುತ್ತಿರಿ. ಓದುವುದರ ಮೂಲಕ ಭಾವನೆಗಳ ನವಿರನ್ನು ಸ್ಪರ್ಶಿಸುತ್ತಿರುತ್ತೇವೆ ನಾವು.

ಅಸಂಗತ ನಾಟಕ ನೋಡಿದಂತಾಯಿತು: ರಮೇಶ ಗುಲ್ವಾಡಿ

ಸುಲಭಕ್ಕೆ ದಕ್ಕುವ ಕಥೆ ಅಲ್ಲವೇ ಅಲ್ಲ. ಸನ್ನಿವೇಶಗಳ ಚಿತ್ರಣ,, ವ್ಯಕ್ತಿತ್ವಗಳ ಅನಾವರಣ ಕಥೆಯ ಅನನ್ಯತೆಯನ್ನು ಸಾದರಪಡಿಸುತ್ತದೆ. ಆದರೆ, ಖಂಡಿತವಾಗಿ ನನಗೂ ಅರ್ಥವಾಗಿದೆ ಎಂದು ಹೇಳಲಾರೆ !

ಮರು ಓದು ಅಗತ್ಯ......
........
ಇನ್ನೊಮ್ಮೆ ಓದಿದೆ..
ಇದೊಂದು ಅಸಂಗತ ಶೈಲಿಯ ಕಥೆ ಎಂದು ತಪ್ಪಾಗಿ ಅಂದಾಜಿಸಿದ್ದೆ. ಸಂಗೀತ ವಾದ್ಯಗಳು ಬದುಕಿನ ತುಣುಕುಗಳನ್ನು ಜಾಣ್ಮೆಯಿಂದ ಪೋಣಿಸಿದಾಗ ಗಾಯದ ಮೇಲೆ ಹೆಚ್ಚಿದ ಮುಲಾಮು ಗಾಯವನ್ನು ಮರೆ ಮಾಡುವಂತೆ ಕಥಾರೂಪ ತಳೆದಿದೆ. ಗಾಯದ ಆಳವನ್ನೂ ನಾನು ತಪ್ಪಾಗಿ ಗುರುತಿಸಿದ್ದೆ‌
ಮಂದಾಕಿನಿ ಮತ್ತು ಬಾಲು ತುಂಬಾ ಪರಿಚಿತ ಪಾತ್ರಗಳು. ಬಹುಶಃ ವಯಸ್ಸಾದ ತಂದೆ ತಾಯಿಗಳು ಇರುವ ಮನೆಗಳಲ್ಲಿ ಇದ್ದೇ ಇರುವ ಪಾತ್ರಗಳು. ಸಂಬಂಧಗಳು ಸಂಕೀರ್ಣಗೊಳ್ಳುವುದೂ ಇಲ್ಲೇ. ಆದರೆ ಕಥೆಯ ನಾಯಕನಾಗುವುದು ಮಾತ್ರ ರಾಬರ್ಟ್ ಸಿಕ್ವೇರಾ ! 
ಕೆಲವೊಮ್ಮೆ ನನಗೆ ಕಥೆಗಾರ ಮತ್ತು ಸಿಕ್ವೇರಾ ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡದ್ದಿದೆ." ಬೀಗ" ಎಂಬುದು ಸಂವೇದನೆಯ ಅಭಿವ್ಯಕ್ತಿಯಂತೆ ಎದುರಾಗುತ್ತದೆ. ಸ್ವಂತ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಬೀಗ ಜಡಿಯುವ ಆತ ಮತ್ತೊಬ್ಬರ ತಾಯಿಯನ್ನು ಕೂಡಿ ಹಾಕಿರುವ ಐಸಿಯುವಿಗೆ ಕಾವಲುಗಾರನಾಗಿರುವುದು ಒಂದು ವ್ಯಂಗ್ಯ." ಅವರೇನು ಓಡಿ ಹೋಗ್ತಾರಾ ?" ಎನ್ನುವ ಭಾವ ಈ ವ್ಯಂಗ್ಯವನ್ನು ಮತ್ತಷ್ಟು ಪ್ರತಿಫಲಿಸುತ್ತದೆ.

ಸಂಬಂಧಗಳಿಗೆ ಒಡೆಯಲಾಗದ ಬೀಗವೇ ಬೇಕು !
ಸ್ಪಂದನೆಯೆನ್ನುವುದು ಮನಸಿನ ತುಡಿತ. ಬೆರಳುಗಳ ಚಲನೆಯೂ ಭಾಷೆಯಷ್ಟೇ ಸಶಕ್ತ ಸಂವಹನವಾಗುವುದನ್ನೂ ಗುರುತಿಸುವ ಕಥೆಗಾರ ಗೌಣವಾಗಿರುವ  ನೋವುಗಳನ್ನು ಭಾವಗಳನ್ನು ಅಭಿವ್ಯಕ್ತಿಗೊಳಿಸುತ್ತಾರೆ.
ಕಥೆಗೆ "ಬೆರಳುಗಳು" ಎಂದೇಕೆ ಹೆಸರಾಯಿತು "ಬೀಗ"  ಎಂದದ್ದರೆ ಇನ್ನೂ ಪರಿಣಾಮಕಾರಿಯಾಗುತಿತ್ತಲ್ಲಾ ಎಂದು ಆಲೋಚಿಸಿದೆ‌ . ಮುಚ್ಚಿದ ಬಾಗಿಲಿನೊಳಗಿನ ಕೌತುಕಕಿಂತ ತೆರೆದ ಐಸಿಯು ನೊಳಗಿನ ಬೆರಳ ಚಲನೆ ಹೆಚ್ಚು ಮೌಲ್ಯಯುತವಾದದ್ದು ಎಂಬುದು ಹೊಳೆಯಿತು.
ಮುಚ್ಚಿಟ್ಟ ಸತ್ಯಗಳು  ಬಚ್ಚಿಟ್ಟ ಸುಳ್ಳುಗಳು ಒಂದಕೊಂದು ಸಂವಾದಿ. ಆದರ ಮುಂಬಾಗಿಲಿಗೆ ಹಾಕಿದ ಬೀಗ ಹಿಂಬಾಗಿಲ ಹಿಡಿತವನ್ನು ಕಳೆದುಕೊಳ್ಳುವುದು ಕೂಡಾ ಮುಖ್ಯವಾಗುತ್ತದೆ.

ಮನಸಿಗೆ ಹಾಕಿದ ಬೀಗವನ್ನು ಇನ್ನಷ್ಟು ಗಟ್ಟಿಗೊಳಿಸುವುದೋ ಅಥವಾ ಮನಸನ್ನೇ ತೆರೆದಿಟ್ಟುಕೊಳ್ಳುವುದೋ ಆಯ್ಕೆ ಮುಕ್ತ.
ಕಥೆ ಆಪ್ತವಾಗಿದೆ. ಒಳ ಮನಸಿನ ಕದವನ್ನೂ ತಟ್ಟುತ್ತದೆ,ಮತ್ತೊಂದು ಓದು ಹೊಸ ನೋಟಗಳನ್ನು........

.....
ಕಾಯಿ ತೆಗೆದುಕೊಂಡು ಹೋದ ಹುಡುಗ ಸಿಕ್ವೇರಾ ತಮ್ಮನ ಮಗನಿರಬಹುದು.
ಬೀಗ ಹಾಕಿದ್ದು ಮುಂಬಾಗಿಲಿಗೆ ಮಾತ್ರ. ಹಿಂದಿನ ಬಾಗಿಲಲ್ಲಿ ಏನೇನೋ ನಡೆಯಬಹುದು.

ಮೇಲಿನವು ಶಾಬ್ದಿಕ ಉತ್ತರ ಗಳು ಅಷ್ಟೇ. ಆದರೆ ಸಂಕೇತ ಬೇರೆಯೇ ಇರಬಹುದೆ......


ಈ ಕಥೆ ಎದೆಯೊಳಗೊಂದು ಬೀಜ ನೆಟ್ಟಿದೆ: ಸಚಿನ್ ಅಂಕೋಲಾ

ಬಹಳ ಭಿನ್ನವಾದ ಕಥೆ .. ನನಗೆ ಚಿತ್ತಾಲರ ಕಥೆಗಳನ್ನು ಓದಿದಾಗ ಉಂಟಾಗುತ್ತಿದ್ದ ಹೊಸತರ ಅನುಭವವೇ ಈ ಕಥೆ ಓದಿನಿಂದಲೂ ಸಿಕ್ಕಿತು..ಅಂತೆಯೇ ಅವರ ಬಹುತೇಕ ಕಥೆಗಳು ಎಷ್ಟೇ ಬಾರಿ ಓದಿದರೂ ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗದೇ ಅಲ್ಲಲ್ಲಿ ನುಣುಚಿಕೊಂಡು ಹೊಸ ಹೊಸ ಹೊಳಹುಗಳೆಡೆಗೂ ತೆರೆದುಕೊಳ್ಳುತ್ತದೆ.. ಈ ಕಥೆಯೂ ಹಾಗೆಯೇ ಇನ್ನೊಂದೆರಡು ಬಾರಿ ಓದಬೇಕು ಅನ್ನಿಸ್ತಿದೆ ನನಗೆ.. ಬೀಗ ಅನ್ನೋದು ಈ ಕಥೆಯಲ್ಲಿ ಬಹಳ ಸಶಕ್ತವಾದ ರೂಪಕವಾಗಿ ಕಾಡತ್ತೆ, ಮತ್ತು ಬೆರಳುಗಳು ಸ್ಪಂಧಿಸುವ ವಿಚಾರವೂ ಕೂಡ ಹಾಗೆಯೇ... ಬಹಳ ಸೂಕ್ಷ್ಮವಾದ ಒಂಚು ವಿಚಾರ ಕಥಾನಾಯಕನ ತಾಯಿಯನ್ನು ಸೆಕ್ಯೂರಿಟಿ ಕಾಯ್ತಾ ಇದ್ದರೆ ಇತ್ತ ಕಥಾನಾಯಕ ಸೆಕ್ಯೂರಿಟಿಯ ತಾಯಿಯನ್ನು ನೋಡಲು ಅವರ ಮನೆಯೆಡೆ ಹೋಗುತ್ತಾನೆ ಇದು ಕಥೆಯ center of attraction.. ಒಟ್ಟಾರೆ ಈ ಕಥೆ ಎದೆಯೊಳಗೊಂದು ಬೀಜ ನೆಟ್ಟಿದೆ ಮತ್ತು ಒಂದಿಷ್ಟು ದಿನ ಅದು ಮೊಳೆತು ನಮ್ಮೊಳಗೆ ಅದು ತನ್ನದೇ ಆಕಾರಪಡೆಯಬಲ್ಲದು ಅನ್ನಿಸತ್ತೆ..


ಬಾಂಧವ್ಯದ ಕೊಂಡಿಗಳನ್ನು ಬಂಧಿಸುವ ಬೀಗ ಸದ್ಯ ದುರ್ಲಭ: ರಾಘವೇಂದ್ರ ಬೈಂದೂರು


ರಾಬರ್ಟ್ ಸಿಕ್ವೇರ ಬೀಗಕ್ಕಾಗಿ ಹುಡುಕುತ್ತಿದ್ದರೆ, ಓದುಗನಾದ ನಾನು ಆ ಕಥೆಯನ್ನು ತೆರೆಯುವ ಸರಿಯಾದ ಕೀಲಿಗಾಗಿ ತಡಕಾಡುತ್ತಿದ್ದೇನೆ. ಒಂದು ವೇಳೆ ಕಥಾ ನಾಯಕನ ಅಮ್ಮನ ಬೆರಳುಗಳಿಗೆ ಜೀವ ಬಂದರೂ.. ಆತನು ಭವಿಷ್ಯದ ಬಿಂಬವನ್ನು ಅರವತ್ತು ಮೀರಿದ ರಾಬರ್ಟ್ ಸಿಕ್ವೇರನ ಮನೆಯಲ್ಲಿ ಕಂಡಿರಬಹುದು...ಬಾಂಧವ್ಯದ ಕೊಂಡಿಗಳನ್ನು ಬಂಧಿಸುವ ಬೀಗ ಸದ್ಯದ ವರ್ತಮಾನದಲ್ಲಿ ದುರ್ಲಭ..




ಕಾಯಿ ತಗೆದು ಕೊಂಡು ಹೋದ ಆ ಹುಡುಗ ಯಾರು...? ಬೀಗ ಈ ತಾಯಿ ಹೇಗೆ ತೆಗೆದಳು..? ಕಥಾ ನಾಯಕ ಆ ಸೆಕ್ಯುರಿಟಿ ಮನೆ ಹುಡುಕಿಕೊಂಡು ಹೋಗುವ ಕುತುಹಲ...ಈಗ ನನ್ನ ತಲೆ ಒಳಗೆ ಹುಳುವಾಗಿ ಹರಿಯುತಿದೆ... 
-ಸಂದೇಶ ವಡೇರಹೋಬಳಿ
-------------------------------------


ಉದಯ ಶೆಟ್ಟಿ, ಪಡುಕರೆ

ಚರ್ಚೆಗಳನ್ನು ಗಮನಿಸಿದರೆ ಹೊಸ ವರ್ಷದ ಕಥಾ ಓದುವಿನಲ್ಲಿ ಬೆರಳುಗಳು ಓದೋದೇ ಒಳ್ಳೆಯದೇನೊ. ಕಥೆ ತಪ್ಪಿಸಿಕೊಂಡರೂ ಕಥೆಗಾರರು ತಪ್ಪಿಸಿಕೊಳ್ಳುವಂತಿಲ್ಲವಲ್ಲ ಅವತ್ತು!